ನಿರ್ದೇಶಕ ಲಕ್ಕಿ ಶಂಕರ್ ಈಗಾಗಲೇ ಕೆಲ ಸಮಾಜಮಿಖಿ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಅವರೀಗ ಸಿಗರೇಟ್ನಿಂದಾಗುವ ಅಪಾಯದ ಕುರಿತು ‘ಸಿಗರೇಟ್’ ಎಂಬ ಕಮರ್ಶಿಯಲ್ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ. ಈ ಬಹು ನಿರೀಕ್ಷಿತ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಲಕ್ಕಿ ಶಂಕರ್ ಅವರೇ ರಚಿಸಿರುವ ‘ಸ್ವಾರ್ಥ ವೇಸ, ಸರ್ವ ನಾಶ, ರಾಹು ದೋಷ ಎಲ್ಲ ಮೋಸ, ಕ್ರೇಜ್ ಇಂದ ಯಾಕೆ ಗೂಸಾ, ಮೋದಿ ಒಬ್ರೆ ಇಲ್ಲಿ ಭಾಷಾ, ಮೋದಿ ಸೂಪರ್ ಹೊಡೆದ್ರು ಬಂಪರ್, ಮೋದಿ ಸೂಪರ್ ಆದ್ರೂ ಲೀಡರ್.... ಎಂಬ ಗೀತೆಯನ್ನು ಸಂಗೀತ ನಿರ್ದೇಶಕ ಕೆ.ಎಂ. ಇಂದ್ರ ಹಾಗೂ ಲಕ್ಕಿ ಶಂಕರ್ ಅವರೇ ಹಾಡಿದ್ದಾರೆ.
‘ಸಿಗರೇಟ್’ ಚಿತ್ರದಲ್ಲಿ ಎಲ್ಲ ಕಲಾವಿದರು ಸೇರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನಾ ಗೀತೆಯಲ್ಲಿ ಪಾಲ್ಗೊಂಡಿರುವುದು ಚಿತ್ರದ ಹಲವು ವಿಶೇಷಗಳಲ್ಲೊಂದು.
ಶಿವಶಂಕರ್ ಫಿಲ್ಮ್ ಫ್ಯಾಕ್ಟರಿ ಮೂಲಕ ತಯಾರಾಗುತ್ತಿರುವ ‘ಸಿಗರೇಟ್’ ಚಿತ್ರದಲ್ಲಿ ಹಾಸ್ಯ, ರೊಮಾನ್ಸ್, ಮನ ತಟ್ಟುವ ಸನ್ನಿವೇಶಗಳನ್ನು ನಿರ್ದೇಶಕರು ಪೇರಿಸಿದ್ದಾರೆ. ನಿರ್ದೇಶಕ ಹಾಗೂ ನಟ ನಾಗಶೇಖರ್ ಅವರು ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಾಗೇಂದ್ರ, ರೂಪಶ್ರೀ, ರಕ್ಷಿತಾ ಪೊನ್ನಮ್ಮ, ಸಾಧು ಕೋಕಿಲ, ಗಿರಿಜ ಲೋಕೇಶ್, ಸುಧಾಕರ್, ಸುಧಾ ಬೆಳವಾಡಿ, ಲಕ್ಕಿ, ಕುರಿ ಪ್ರತಾಪ್, ಮಿತ್ರ, ವಿಜಯ್ ಚೆಂಡೂರ್ ಸಹ ತಾರಾಗಣದಲ್ಲಿದ್ದಾರೆ.
ಶಿವು ಕಬ್ಬಿಣ ಅವರು ಈ ಸಿನೆಮಾದ ನಿರ್ಮಾಪಕರು. ರಮೇಶ್ ರಾಜ್ ಅವರ ಛಾಯಾಗ್ರಹಣ, ಇಂದ್ರಸೇನ ಅವರ ಸಂಗೀತ, ಸುಪ್ರೀತ್ ಅವರ ಸಂಕಲನ, ಮಾಲೂರ್ ಶ್ರೀ ನಿವಾಸ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.